Close

ಪ್ರವಾಸೋದ್ಯಮ

ಉತ್ತರ ಕರ್ನಾಟಕವು 5 ನೇ ಶತಮಾನದಷ್ಟು ಹಿಂದಿನ ಸ್ಮಾರಕಗಳನ್ನು ಹೊಂದಿದೆ. ಡೆಕ್ಕನ್ ಅನ್ನು ಆಳಿದ ಕನ್ನಡ ಸಾಮ್ರಾಜ್ಯಗಳು ಇಲ್ಲಿ ತಮ್ಮ ರಾಜಧಾನಿಗಳನ್ನು ಹೊಂದಿದ್ದವು. ಬಳ್ಳಾರಿ ಜಿಲ್ಲೆಯ ಹಂಪಿಯಲ್ಲಿ125 ಕಿ.ಮೀ. ವಿಸ್ತೀರ್ಣದಲ್ಲಿ ಹರಡಿರುವ ಅವಶೇಷಗಳು ಇವೆ. ಬಳ್ಳಾರಿ ಜಿಲ್ಲೆಯ ಹಂಪಿಯು ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. 15 ಮತ್ತು 16 ನೇ ಶತಮಾನಗಳಲ್ಲಿ ವಿದೇಶಿ ಪ್ರವಾಸಿಗರು ಹಂಪಿಯನ್ನು ರೋಮ್‌ ಗಿಂತ ದೊಡ್ಡದಿರುವದಾಗಿ ವರ್ಣಿಸಿದ್ದಾರೆ. ಈ ನಗರವು 1565 ರಲ್ಲಿ ಮೊಘಲ್ ದಾಳಿಕೋರರ ಆಕ್ರಮಣದಿಂದ ನಾಶಗೊಂಡಿತು ಮತ್ತು ಅದರ ಅವಶೇಷಗಳು ಈಗ ತುಂಗಭದ್ರ ನದಿಯ ಸುತ್ತಮುತ್ತ 26 ಚದರ ಕಿ.ಮೀ ಪ್ರದೇಶದಲ್ಲಿ ಹರಡಿವೆ. ನದಿಯ ಉತ್ತರದ ಅನೆಗುಂದಿ ಸಮೀಪದ ಕಲ್ಲಿನ ಪ್ರದೇಶವನ್ನು ರಾಮಾಯಣದ ಸಮಯದ ಕಿಶ್ಕಿಂಧಾ ಎಂದು ಗುರುತಿಸಲಾಗಿದೆ. ಹಂಪಿಯಲ್ಲಿ 29 ಅಡಿ ಎತ್ತರದ (8.8 ಮೀ) ಏಕಶಿಲೆಯ ಉಗ್ರ ನರಸಿಂಹ ಮೂರ್ತಿಯನ್ನು ಹೊಂದಿದೆ, ಇದನ್ನು 1529 ರಲ್ಲಿ ಶ್ರೀ ಕೃಷ್ಣದೇವರಾಯರಿಂದ ಸ್ಥಾಪಿಸಲಾಯಿತು. ಇಂದಿಗೂ ನಾವು ಅರಮನೆಗಳು ಮತ್ತು ಇತರ ಅವಶೇಷಗಳನ್ನು ಕಾಣಬಹುದು.